ಎರಡು ದಿನಗಳು ಕಳೆದ ನಂತರ ವೆರೊನಿಕಾ ವೈದ್ಯರಿಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿ ತಾನು ದೆಹಲಿ ವಿಮಾನ ನಿಲ್ದಾಣದಲ್ಲಿದ್ದು ಸುಂಕ ಅಧಿಕಾರಿಗಳ ಬಂಧನದಲ್ಲಿದ್ದೇನೆ ಎಂದಿದ್ದಳು. ತನ್ನ ಬಳಿಯಿರುವ ಎಲ್ಲಾ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ತೆಗೆದುಕೊಂಡಿರುವುದರಿಂದ ಹಣದ ಅವಶ್ಯಕತೆಯಿದ್ದು, ತಕ್ಷಣವೇ ಹಣ ಕಳುಹಿಸುವಂತೆ ಕೋರಿದ್ದಳು. ಮತ್ತೊಬ್ಬರು ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡು ವೈದ್ಯರ ಬಳಿ ಫೋನ್ ನಲ್ಲಿ ಮಾತನಾಡಿ ವೆರೊನಿಕಾ ಹೆಸರಿನಲ್ಲಿ 5 ಲಕ್ಷ ರೂಪಾಯಿ ಬ್ಯಾಂಕಿಗೆ ಠೇವಣಿಯಿಡುವಂತೆ ಹೇಳಿದ್ದರು.