ಜಯಲಲಿತಾ ಸಾವು ತನಿಖೆಗೆ ವಿಚಾರಣಾ ಆಯೋಗ ರಚಿಸಿದ ತಮಿಳುನಾಡು ಸರ್ಕಾರ!

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಮೃತಪಟ್ಟು 10 ತಿಂಗಳ ನಂತರ ಅವರ ಸಾವಿನ ಕುರಿತ ತನಿಖೆಗೆ ವಿಚಾರಣಾ ಆಯೋಗ ತಮಿಳುನಾಡು...
ಜೆ ಜಯಲಲಿತಾ
ಜೆ ಜಯಲಲಿತಾ
Updated on
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಮೃತಪಟ್ಟು 10 ತಿಂಗಳ ನಂತರ ಅವರ ಸಾವಿನ ಕುರಿತ ತನಿಖೆಗೆ ವಿಚಾರಣಾ ಆಯೋಗ ತಮಿಳುನಾಡು ಸರ್ಕಾರ ರಚಿಸಿದೆ.
ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಾಮೂರ್ತಿ ಆರುಮುಗ ಸ್ವಾಮಿ ನೇತೃತ್ವದಲ್ಲಿ ವಿಚಾರಣೆ ಆಯೋಗದ ರಚಿಸಿರುವ ಸರ್ಕಾರ ಜೆ ಜಯಲಲಿತಾ ಅವರ ಸಾವಿನ ಕುರಿತಾದ ಸಮಗ್ರ ವರದಿಯನ್ನು ನೀಡುವಂತೆ ಸರ್ಕಾರ ಹೇಳಿದೆ. 
ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಆಗಸ್ಟ್ 17ರಂದು ವಿಚಾರಣೆ ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದರು. ಅಂತೆ ಇಂದು ನ್ಯಾಯಮೂರ್ತಿ ಆರುಮುಗಸ್ವಾಮಿ ಅವರನ್ನೊಳಗೊಂಡ ವಿಚಾರಣೆ ಆಯೋಗವನ್ನು ಸರ್ಕಾರ ರಚಿಸಿದೆ. 
ಹೃದಯ ಸ್ತಂಭನ ಸಮಸ್ಯೆಗೆ ಒಳಗಾಗಿದ್ದ ಜಯಲಲಿತಾ ಅವರು 75 ದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿ ಡಿಸೆಂಬರ್ 5ರಂದು ಮೃತಪಟ್ಟಿದ್ದರು. 
ಜಯಲಲಿತಾ ಸಾವಿನ ಪ್ರಕರಣ ತನಿಖೆ ಮಾಡಬೇಕು ಎಂದು ಬಂಡಾಯ ನಾಯಕರು ಹಾಗೂ ಉಪ ಮುಖ್ಯಮಂತ್ರಿ ಓ. ಪನ್ನೀರು ಸೆಲ್ವಂ ಅವರು ಆಗ್ರಹಿಸಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com