ಜಮ್ಮು: ಬಿಎಸ್ಎಫ್ ಯೋಧನ ಹತ್ಯೆಯಲ್ಲಿ ಲಷ್ಕರ್ ಇ ತೊಯ್ಬಾದ ಕೈವಾಡ ಶಂಕೆ

ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ನಿನ್ನೆ ಗಡಿ ಭದ್ರತಾ ಪಡೆ ಯೋಧ....
ಗಡಿ ಭದ್ರತಾ ಪಡೆಯ ಜವಾನ ರಮ್ಜಾನ್ ಪರ್ರಿ
ಗಡಿ ಭದ್ರತಾ ಪಡೆಯ ಜವಾನ ರಮ್ಜಾನ್ ಪರ್ರಿ
ಬಂಡಿಪೊರ: ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ನಿನ್ನೆ ಗಡಿ ಭದ್ರತಾ ಪಡೆ ಯೋಧ ರಂಜಾನ್ ಪರ್ರೆ ಅವರ ಬರ್ಭರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾದ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಉತ್ತರ ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ನಿತೀಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಮೂರರಿಂದ ನಾಲ್ಕು ಮಂದಿ ಉಗ್ರರು ಮೊದಲು ಚೂರಿಯಿಂದ ದಾಳಿ ನಡೆಸಿದರು.  ನಂತರ ಒಂದೇ ಸಮನೆ ಗುಂಡಿನ ದಾಳಿ ನಡೆಸಿದರು. ಮೇಲ್ನೋಟಕ್ಕೆ ಇದು ಲಷ್ಕರ್ ಇ ತೊಯ್ಬಾದ ಮೊಹಮ್ಮದ್ ಬಾಯ್ ಮತ್ತು ಆತನ ಸಹಚರರ ಕೃತ್ಯವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಇನ್ಸ್ ಪೆಕ್ಟರ್ ಜನರಲ್ ತಿಳಿಸಿದ್ದಾರೆ.
ಹುತಾತ್ಮ ಯೋಧನ ಅಂತ್ಯಕ್ರಿಯೆ ಇಂದು ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com