ಓರ್ವ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಿಸಿದರೆ ಊಂದು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಬೇಕಾಗುವುದು. ಆ ಖರ್ಚು ಚುನಾಯಿತ ಸರ್ಕಾರದ ಹೆಗಲಿಗೆ ಬರಲಿದೆ. ಇದಕ್ಕಾಗಿ ಓರ್ವ ಅಭ್ಯರ್ಥಿ, ಒಂದು ಕ್ಷೇತ್ರ ಎನ್ನುವ ನೀತಿ ಜಾರಿಯಾಗಬೇಕು ಎಂದು ಕೋರಿ ಬಿಜೆಪಿ ನಾಯಕ , ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದರು.