ಬಿಜೆಪಿ ದಲಿತರಿಗೆ ಮತ್ತು ಹಿಂದೂಳಿದ ವರ್ಗದವರಿಗೆ ಉನ್ನತ ಗೌರವ ನೀಡಿದೆ. ನಮ್ಮ ಪ್ರಧಾನಿ ಸಹ ಹಿಂದೂಳಿದ ವರ್ಗದವರು, ನಮ್ಮ ಅಧ್ಯಕ್ಷರು ದಲಿತ. ಬಿಜೆಪಿಯಿಂದಾಗಿ ಎರಡು ಪ್ರಮುಖ ಹುದ್ದೆಗಳು ಹಿಂದೂಳಿದವರಿಗೆ ಮತ್ತು ದಲಿತರಿಗೆ ಸಿಕ್ಕಿವೆ. ಸಬ್ಕಾ ಸಾಥ್, ಸಬ್ ಕಾ ವಿಕಾಸದಡಿ ಬಿಜೆಪಿ ಕೆಲಸ ಮಾಡುತ್ತಿದೆ. ಇದರಿಂದ ಹತಾಶೆಗೊಂಡಿರುವ ಪ್ರತಿಪಕ್ಷಗಳು ದಲಿತರನ್ನು ಪ್ರಚೋದಿಸಲು ಯತ್ನಿಸುತ್ತಿವೆ. ಆದರೆ ಅವರ ಪ್ರಯತ್ನ ಫಲ ನೀಡುವುದಿಲ್ಲ ಎಂದು ಶರ್ಮಾ ಅವರು ಪಿಟಿಐ ಸಂದರ್ಶನದಲ್ಲಿ ತಿಳಿಸಿದ್ದಾರೆ.