ಕಳೆದ ಮಾರ್ಚ್ 5ರಂದು ಆರಂಭವಾಗಿದ್ದ ಸಂಸತ್ ಕಲಾಪ ಒಂದೇ ಒಂದು ಮಸೂದೆಯನ್ನೂ ಅಂಗೀಕಾರ ಮಾಡಲಾಗದೇ ಕೇವಲ ಗದ್ದಲಗಳ ಗೊಂದಲದಲ್ಲೇ ಅಂತ್ಯಗೊಂಡಿದೆ. ಈಶಾನ್ಯ ಭಾರತ ರಾಜ್ಯದ ವಿಧಾನಸಭಾ ಚುನಾವಣೆ ಬಳಿಕ ನಡೆದ ಪ್ರತಿಮೆ ಧ್ವಂಸ ವಿಚಾರದಿಂದ ಆರಂಭವಾದ ವಿಪಕ್ಷಗಳ ಗಲಾಟೆ, ಗದ್ದಲ, ಪ್ರತಿಭಟನಾ ಪ್ರಹಸನ, ಕಾವೇರಿ ನಿರ್ವಹಣಾ ಮಂಡಳಿ ರಚನೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದವರೆಗೂ ಮುಂದುವರೆದಿತ್ತು.