ಇದೀಗ ಈ ಫಾರೂಕ್ ಅಹ್ಮದ್ ದಾರ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಸೇನೆ ತನ್ನನ್ನು ಮಾನವ ಗುರಾಣಿಯಾಗಿಸಿಕೊಂಡ ಬಳಿಕ ಸ್ಥಳೀಯ ಗ್ರಾಮಸ್ಥರು ತನ್ನನ್ನು ಸರ್ಕಾರದ ಏಜೆಂಟ್ ಎಂಬಂತೆ ನೋಡುತ್ತಿದ್ದು, ಯಾರೂ ಕೂಡ ನನಗೆ ಕೆಲಸ ನೀಡುತ್ತಿಲ್ಲ, ಕನಿಷ್ಛಪಕ್ಷ ದಿನಗೂಲಿಗೂ ಯಾರೂ ಕರೆಯುತ್ತಿಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಇದೇ ಚಿಂತೆಯಿಂದಾಗಿ ತಾನು ಇನ್ಸೋಮೇನಿಯಾ (ನಿದ್ರಾಹೀನತೆ) ಮತ್ತು ಖಿನ್ನತೆಯಿಂದ ಬಳಲುತ್ತಿದ್ದು, ಕನಿಷ್ಠ ತನ್ನ ಆರೋಗ್ಯದ ಚಿಕಿತ್ಸಾ ವೆಚ್ಚಕಾಗುವಷ್ಟೂ ದುಡಿಯಲೂ ಸಾಧ್ಯವಾಗುತ್ತಿಲ್ಲ ಎಂದು ಫಾರೂಕ್ ಅಹ್ಮದ್ ದಾರ್ ಹೇಳಿಕೊಂಡಿದ್ದಾನೆ.