ಪಕ್ಷದ ಉಪವಾಸ ಸತ್ಯಾಗ್ರಹ: ಗೋಡಂಬಿ ತಿಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ

ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು...
ಪಕ್ಷದ ಉಪವಾಸ ಸತ್ಯಾಗ್ರಹ ದಿನದಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ!
ಪಕ್ಷದ ಉಪವಾಸ ಸತ್ಯಾಗ್ರಹ ದಿನದಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ!
Updated on
ನವದೆಹಲಿ: ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ  ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದರೂ, ಬಿಜೆಪಿ ನಾಯಕರೊಬ್ಬರು ಜ್ಯೂಸ್ ಹಾಗೂ ಒಣ ಹಣ್ಣುಗಳನ್ನು ತಿಂದಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಬಿಜೆಪಿ ನಾಯರ ಹರಕ್ ಸಿಂಗ್ ರಾವತ್ ಅವರು ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದು, ತಮ್ಮ ತಪ್ಪನ್ನು ರಾವತ್ ಅವರು ಒಪ್ಪಿಕೊಂಡಿದ್ದಾರೆ. 
ಮೋದಿಯವರು ನೀಡಿದ್ದ ಸೂಚನೆ ಬಗ್ಗೆ ಮಾಹಿತಿ ಅರಿಯದ ಹರಕ್ ಸಿಂಗ್ ರಾವತ್ ಅವರು, ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದಾರೆ. ಪಕ್ಷದ ಎಲ್ಲಾ ನಾಯಕರು ಉಪವಾಸ ಮಾಡಿದ್ದಾರೆ. ಆದರೆ, ತಿಳಿಯದೆಯೇ ನಾನು ಕಾರ್ಯಕ್ರಮದಲ್ಲಿ ಗೋಡಂಬಿಗಳನ್ನು ತಿಂದುಬಿಟ್ಟೆ ಎಂದು ಹೇಳಿದ್ದಾರೆ. 
ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೆಲ ದಿನಗಳ ಹಿಂದಷ್ಟೇ ರಾಜಧಾನಿ ದೆಹಲಿಯ ರಾಜ್'ಘಾಟ್ ನಲ್ಲಿ ಕಾಂಗ್ರೆಸ್ ನಾಯಕರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರೊಬ್ಬರು ರೆಸ್ಟೋರೆಂಟ್ ವೊಂದರಲ್ಲಿ ಪೂರಿ ಹಾಗೂ ಸಾಗು ತಿನ್ನುತ್ತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದಕ್ಕೆ ಬಿಜೆಪಿ ಕೂಡ ವ್ಯಂಗ್ಯವಾಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com