ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿದೇಶಕ್ಕೆ ತೆರಳಲು ಜೋಧಪುರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಮೇ 25 ರಿಂದ 10 ಜುಲೈ ವರೆಗೆ ಕೆನಡಾ, ನೇಪಾಳ ಮತ್ತು ಯುಎಸ್ಎ ಸೇರಿದಂತೆ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಜೋಧಪುರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಇಸಿದ್ದರು.
1998ರಲ್ಲಿ ’ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ನಟ ಸಲ್ಮಾನ್ ಖಾನ್ ಜೋಧಪುರ್ ದಲ್ಲಿ ಎರಡು .ಕೃಷ್ಣಮೃಗಗಲನ್ನು ಕಾನೂನು ಬಾಹಿರವಾಗಿ ಬೇಟೆಯಾಡಿದ್ದರು. ಪ್ರಕರಣದಲ್ಲಿ ಸಲ್ಮಾನ್ ಗೆ 5 ವರ್ಷಗಳ ಜೈಲು ಶಿಕ್ಷೆ ಯಾಗಿತ್ತು.
ಶಿಕ್ಷೆಯಾದ ಬಳಿಕ ಎರಡು ದಿನಗಳ ಕಾಲ ಜೋಧಪುರ್ ಜೈಲಿನಲ್ಲಿ ಕಳೆದಿದ್ದ ನಟ ಜಾಮೀನಿನ ಮೇಲೆ ಹೊರಬಂದಿದ್ದರು.