ಗುರು ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಮುಂಬರುವ ಮೇ ತಿಂಗಳಿನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿ ವೇಳೆ ಹೊಸ ವ್ಯವಸ್ಥೆ ತಿಳುವಳಿಕಾ ಪತ್ರಕ್ಕೆ(ಎಂಒಯು) ಭಾರತ ಮತ್ತು ದಕ್ಷಿಣ ಕೊರಿಯಾ ದೇಶಗಳ ಅಧಿಕಾರಿಗಳು ಸಹಿ ಹಾಕಲಿವೆ. ಹೊಸ ವ್ಯವಸ್ಥೆಯಿಂದಾಗಿ ಟೋಲ್ ಗಳಲ್ಲಿ ವಾಹನ ಸಂಚಾರ ಸುಗುಮವಾಗಲಿದೆ. ಮೆಟ್ರೊ ಸಿಟಿಗಳಲ್ಲಿರುವ ಟೋಲ್ ಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ. ಹಾಗಾಗಿ ಆರಂಭದಲ್ಲಿ ಮೆಟ್ರೋ ನಗರದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ನಿರ್ಧಾರ ಮಾಡಿದ್ದೇವೆ ಇದರಿಂದ ಟೋಲ್ ಗಳಲ್ಲಿ ಸಂಚಾರ ಸುಗುಮವಾಗಲಿದೆ ಎಂದು ತಿಳಿಸಿದರು.