ಮಾರ್ಗದರ್ಶಕ್ ಮಂಡಳಿ ರಚನೆಯಾದ ನಂತರ ಇದುವರೆಗೂ ಅಧಿಕೃತವಾಗಿ ಒಂದು ಬಾರಿಯೂ ಸಭೆ ಸೇರಿಲ್ಲ. ಪ್ರಸ್ತುತ ಬಿಜೆಪಿ ನಾಯಕತ್ವ ಪಕ್ಷದ ನಾಯಕರು ಮತ್ತು ಸಂಸದರು ತಮ್ಮ ಅಭಿಪ್ರಾಯ ತಿಳಿಸಲು ಇದ್ದ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದು, ಅಡ್ವಾಣಿ ಮತ್ತು ಜೋಶಿ ಅವರು ಮೌನ ಮುರಿದು ಮಾತನಾಡಬೇಕು ಎಂದು ಸಿನ್ಹಾ ಒತ್ತಾಯಿಸಿದ್ದಾರೆ.