ಪ್ರಧಾನ ಅರ್ಚಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ನೀಡುವ ನಿರ್ಧಾರ ತಡೆ ಹಿಡಿಯಲಾಗಿದೆ. ಈ ಸಂಬಂಧ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿಯವರಿಗೆ ಹಿಂದೂಯೇತರರಿಗೆ ಅವಕಾಶವಿಲ್ಲ ಎಂದು ದೇವಸ್ಥಾನ ಮಂಡಳಿ ಅಧ್ಯಕ್ಷ ಕೆಬಿ ಮೋಹಂದಾಸ್ ಅವರು ಹೇಳಿದ್ದಾರೆ. ಅಲ್ಲದೆ ದೇಗುಲದ ಊಟದ ಕೋಣೆಗೆ ಆಗಮಿಸುವವರಿಗೆ ಇದ್ದ ವಸ್ತ್ರಸಂಹಿತೆಯನ್ನೂ ಮುಂದುವರೆಸಲಾಗಿದ್ದು, ಭಕ್ತಾದಿಗಳು ಅಂಗಿ, ಪ್ಯಾಂಟ್ ಹಾಗೂ ಚಪ್ಪಲಿಯನ್ನೂ ಧರಿಸಿ ಊಟದ ಕೋಣೆಗೆ ಬರವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.