'ಒಬ್ಬ ನ್ಯಾಯಾಧೀಶರ ಪದಚ್ಯುತಿ ಆಗ್ರಹಿಸಿ ಲೋಕಸಭೆ ಸ್ಪೀಕರ್ ಅಥವಾ ರಾಜ್ಯಸಭೆ ಅಧ್ಯಕ್ಷರಿಗೆ ಬಂದ ನೋಟೀಸನ್ನು ಅವರು ತಿರಸ್ಕರಿಸಬಹುದು ಅಥವಾ ಪುರಸ್ಕರಿಸಬಹುದು. ಏನೇ ಆದರೂ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗದು. ಇದು ಸಂಪೂರ್ಣ ಸ್ಪೀಕರ್ ಅಥವಾ ಸಭಾಪತಿಗಳ ಅಧಿಕಾರ ವ್ಯಾಪ್ತಿಗೆ ಸೇರಿದ ವಿಷಯವಾಗಿದ್ದು, ಸಂಸದರು ನೀಡಿದ ನೋಟೀಸ್ನಲ್ಲಿ ಉಲ್ಲೇಖಿಸಿದ ಆರೋಪಗಳ ಅರ್ಹತೆಯನ್ನು ನಿರ್ಧರಿಸುವ ಅಧಿಕಾರ ಅವರಿಗಿದೆ. ಮೇಲ್ನೋಟಕ್ಕೆ ಆರೋಪಗಳಲ್ಲಿ ಹುರುಳಿದೆ ಅನಿಸದರೆ ಸೂಕ್ತ ತನಿಖೆಗೆ ಆದೇಶಿಸಬಹುದು. ಇಲ್ಲವಾದರೆ ನೋಟೀಸ್ ಅನ್ನು ತಿರಸ್ಕರಿಸಬಹುದು. ಏನೇ ಆದರೂ ಅವರ ತೀರ್ಮಾನವೇ ಅಂತಿಮ ಎಂದು ಕೆ ಪರಶಾರನ್ ಅವರು ಹೇಳಿದ್ದಾರೆ.