ನವದೆಹಲಿ: 1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸಲೀಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.
ಇಂದು ನಿಗದಿಯಾಗಿದ್ದ ತೀರ್ಪು ಪ್ರಕಟಣೆಯನ್ನು ಕಾರಣಾಂತರದಿಂದ ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.
ಏಪ್ರಿಲ್ 21ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು (ಏ.28) ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು. ಆದರೆ ಇಂದು ಮತ್ತೆ ತೀರ್ಪನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸಲೀಂ ಬಗ್ಗೆ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಫೆಬ್ರವರಿಯಲ್ಲಿ ಮತ್ತೆ ಹೊಸದಾಗಿ ವಿಚಾರಣೆಗೆ ಪ್ರಾರಂಭಿಸಲು ಫ್ರೆಶ್ ಪ್ರೊಡಕ್ಷನ್ ವಾರಂಟ್ ಹೊರಡಿಸಲಾಗಿತ್ತು.
ಸಧ್ಯ 2002 ರಲ್ಲಿ ದೆಹಲಿ ಉದ್ಯಮಿ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂ.ಸುಲಿಗೆ ಮಾಡಿದ್ದ ಸಂಬಂಧ ಅಬು ಸಲೀಂ ತನಿಖೆ ಎದುರಿಸುತ್ತಿದ್ದಾನೆ.