ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ 18, 452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗಾಗಿ ಎನ್ ಡಿ ಎ ಸರ್ಕಾರ 75,893 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು, ಯೋಜನೆ ಕೈಗೆತ್ತಿಕೊಂಡ ನಂತರ ವಿದ್ಯುತ್ ಸಂಪರ್ಕವೇ ಇಲ್ಲದಿದ್ದ 1275 ಗ್ರಾಮಗಳು ಮತ್ತೆ ಪತ್ತೆಯಾಗಿದ್ದವು. ಏ.28 ರ ವೇಳೆಗೆ ಎಲ್ಲಾ ವಿದ್ಯುತ್ ವಂಚಿತ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ತಲುಪಿಸಲಾಗಿದೆ.