ಕಾಂಗ್ರೆಸ್ ಪ್ರಕಾರ ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿದರೆ ಬಿಜೆಪಿ ವಿರುದ್ಧ ರಚಿಸಲಾಗುತ್ತಿರುವ ಮಹಾಘಟಬಂಧನದ ಒಗ್ಗಟ್ಟಿಗೆ ಹೊಡೆತ ಬೀಳುತ್ತದೆ. ಆದರೆ ದೇವೇಗೌಡರು ಮಾತ್ರ ಈ ಬಗ್ಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದು, ಮಮತಾ ಬ್ಯಾನರ್ಜಿ, ಮಾಯಾವತಿ ಪ್ರಧಾನು ಅಭ್ಯರ್ಥಿಯಾಗುವುದರ ಬಗ್ಗೆ ಯಾರೂ ಊಹಿಸದಂತಹ, ಅಚ್ಚರಿಯ ಹೇಳಿಕೆ ನೀಡಿದ್ದಾರೆ.