ಕುತಂತ್ರದಿಂದ ದಲಿತ ವಿದ್ಯಾರ್ಥಿ ಮೂತ್ರ ಸೇವನೆ : ಆತ್ಮಹತ್ಯೆಗೆ ಯತ್ನ

ಸಹಪಾಠಿಗಳು ಹಾಗೂ ಶಿಕ್ಷಕರ ಕುತಂತ್ರದಿಂದ ಮೂತ್ರ ಸೇವನೆ ಮಾಡಿದ 8 ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ನಂತರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಂಜಾಬ್ ರಾಜ್ಯದ ಜಲಾಂದರ್ ನಲ್ಲಿ ನಡೆದಿದೆ .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪಂಜಾಬ್  : ಸಹಪಾಠಿಗಳು ಹಾಗೂ ಶಿಕ್ಷಕರ ಕುತಂತ್ರದಿಂದ  ಮೂತ್ರ ಸೇವನೆ ಮಾಡಿದ 8 ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ನಂತರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಂಜಾಬ್  ರಾಜ್ಯದ ಜಲಾಂಧರ್  ನಲ್ಲಿ ನಡೆದಿದೆ .

ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ನಂತರ ವಿದ್ಯಾರ್ಥಿ ಮನೆಯಿಂದ ಮೇಲಿಂದ ಬಿದ್ದು ದೇಹದ ಅನೇಕ ಭಾಗಗಳು ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

12 ವರ್ಷದ  ವಿದ್ಯಾರ್ಥಿ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ  ಹಿನ್ನೆಲೆಯಲ್ಲಿ ಶಿಕ್ಷಕ ಶ್ರೀಕಿ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕೆಲ ಸಹಪಾಠಿಗಳು ಕುಡಿಯುವ ನೀರಿನ ಬಾಟಲಿಯಲ್ಲಿ ಮೂತ್ರ ಸೇರಿಸಿ ಆ ವಿದ್ಯಾರ್ಥಿ ಸೇವಿಸುವಂತೆ  ಮಾಡಿದ್ದಾರೆ. ನಂತರ ಅದನ್ನು ಕುಡಿದ ಬಳಿಕ ನಿಂದಿಸಿದ್ದಾರೆ. ಈ ವಿಷಯವನ್ನು ಶಿಕ್ಷಕ ಶರ್ಮಾರ ಬಳಿ ದೂರು ನೀಡಿದ್ದರಿಂದ ಅವರು ಸಹ ಮನಬಂದಂತೆ ಥಳಿಸಿ ಪ್ರಾಂಶುಪಾಲರ ಬಳಿಗೆ ಕೊಂಡೊಯ್ಯುದಿದ್ದಾರೆ .

ನಂತರ ವಿದ್ಯಾರ್ಥಿ ತಾಯಿಯನ್ನು ಶಾಲೆಗೆ ಕರೆದು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ
ಇದರಿಂದ ಮನನೊಂದು ತಮ್ಮ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವಿದ್ಯಾರ್ಥಿ ತಾಯಿ  ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಶರ್ಮಾ ವಿರುದ್ಧ ಐಪಿಸಿ  ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ಹಾನಿಯನ್ನು ಉಂಟುಮಾಡುವುದು ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com