ತೇಜಶ್ವಿ ಯಾದವ್ - ನಿತೀಶ್‌ ಕುಮಾರ್
ತೇಜಶ್ವಿ ಯಾದವ್ - ನಿತೀಶ್‌ ಕುಮಾರ್

ಮುಜಾಫರಪುರ್ ಸೆಕ್ಸ್ ಹಗರಣ: 'ಹೇಡಿ' ನಿತೀಶ್‌ ಕುಮಾರ್ ರಾಜಿನಾಮೆ ನೀಡಬೇಕು: ತೇಜಶ್ವಿ ಯಾದವ್

ಮುಜಾಫರಪುರ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ...
ಪಾಟ್ನಾ : ಮುಜಾಫರಪುರ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆರ್ ಜೆಡಿ ನಾಯಕ ತೇಜಶ್ವಿ ಯಾದವ್ ಅವರು, ಸರ್ಕಾರ ನಡೆಸಲು ಅಸಮರ್ಥವಾಗಿರುವ ಮತ್ತು ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡಲಾಗದ ಹೇಡಿ ನಿತೀಶ್‌ ಕುಮಾರ್‌ ಅವರು ನೈತಿಕ ಹೊಣೆಹೊತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು ಎಂದು ಶನಿವಾರ ಒತ್ತಾಯಿಸಿದ್ದಾರೆ.
ನಿತೀಶ್‌ ಕುಮಾರ್‌ ಅವರು ಒಬ್ಬ ಹೇಡಿ, ಅವರು ಕ್ರಿಮಿನಲ್‌ಗ‌ಳನ್ನು ರಕ್ಷಿಸುತ್ತಿದ್ದಾರೆ' ಎಂದು ತೇಜಶ್ವಿ ಯಾದವ್‌ ನೇರವಾಗಿಯೇ ಆರೋಪಿಸಿದ್ದಾರೆ.
ಸರ್ಕಾರ ನಡೆಸಲು ಅಸಮರ್ಥವಾಗಿರುವ ನಿತೀಶ್ ಕುಮಾರ್ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲಾಗದ ಹೇಡಿ ಸಿಎಂ ನೀವು. ನಿಮಗೆ ಒಂದು ವಾರದ ಗಡುವು ನೀಡುತ್ತೇನೆ; ಅಷ್ಟರೊಳಗೆ ಮುಜಫ‌ರಪುರ್ ಶೆಲ್ಟರ್ ನಲ್ಲಿದ್ದ ಹೆಣ್ಣುಮ್ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದರೆ ನಾವು ಮಧುಬನಿಯಲ್ಲಿ ಭಾರೀ ದೊಡ್ಡ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಯಾದವ್‌ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಿಬಿಐ ಬಿಹಾರದ ಮುಜಫ‌ರಪುರ್ ಬಾಲಿಕಾಶ್ರಮ ಸೆಕ್ಸ್‌ ಹಗರಣದ ತನಿಖೆಯನ್ನು ಕೈಗತ್ತಿಕೊಂಡಿರುವುದನ್ನು ಅನಸರಿಸಿ ಯಾದವ್‌ ಅವರು ಈ ಎಚ್ಚರಿಕೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com