ಯೋಗಿ ಆದಿತ್ಯನಾಥ್ ಜೀವನಚರಿತ್ರೆ ಅತ್ಯುತ್ತಮ ಮಾರಾಟ !

ಲಖನೌ ಟೈಮ್ಸ್ ಆಫ್ ಇಂಡಿಯಾ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ರಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಚರಿತ್ರೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುತ್ತಿದೆ.
ಪ್ರವೀಣ್ ಕುಮಾರ್, ಯೋಗಿ ಆದಿತ್ಯನಾಥ್
ಪ್ರವೀಣ್ ಕುಮಾರ್, ಯೋಗಿ ಆದಿತ್ಯನಾಥ್
Updated on

ನವದೆಹಲಿ: ಲಖನೌ ಟೈಮ್ಸ್ ಆಫ್ ಇಂಡಿಯಾ  ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ರಚಿಸಿರುವ  ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅವರ ಜೀವನಚರಿತ್ರೆ  ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುತ್ತಿದೆ.

ಉತ್ತರ ಖಂಡ್  ರಾಜ್ಯದ ಹಳ್ಳಿಯೊಂದರಿಂದ ಗೋರಕ್ ನಾಥ್ ದೇವಾಲಯದವರೆಗಿನ ಅವರ ಸುಂದರ ಜೀವಣ ಪಯಣ , ಸಂಸತ್ತು, ಹಾಗೂ ಅಂತಿಮವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರ ಜೀವನ ಕುರಿತು ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.

' ದಿ ರೈಸ್ ಆಫ್ ಎ ಸ್ಯಾಪ್ರೋನ್  ಸೋಶಿಯಲಿಸ್ಟ್ ' ಈ ದಿನಗಳಲ್ಲಿ ಹಲವಾರು ರಾಜಕಾರಣಿಗಳು ಮತ್ತು ರಾಜಕೀಯ ಪತ್ರಕರ್ತರ ವಿಶೇಷ ಸಂಗ್ರಹಕ್ಕೆ ನಿಧಾನವಾಗಿ ಮತ್ತು ನಿಧಾನವಾಗಿ ದಾರಿ ಮಾಡಿಕೊಡುತ್ತಿದೆ. ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನ ಆರಂಭ ಹಾಗೂ ಜನರಿಗೆ ಎಷ್ಟೋ ಗೊತ್ತಿಲ್ಲದಂತಹ ಅನೇಕ ವಿಚಾರಗಳು ಈ ಪುಸ್ತಕದಲ್ಲಿದೆ.

ಇಂತಹ ಪುಸ್ತಕಗಳು ಸಾಮಾಜಿಕ , ರಾಜಕೀಯ ಮುಖಂಡರನ್ನು ಪ್ರೇರೆಪಿಸುತ್ತವೆ  ಎಂದು ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್  ಹೃದಯ್ ನಾರಾಯಣ್ ದೀಕ್ಷಿತ್  ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಟೈಮ್ಸ್ ಸಮೂಹದಿಂದ ಈ ಪುಸ್ತಕ ಮುದ್ರಣಗೊಂಡಿದ್ದು, ಮೊದಲ ಕೃತಿಯನ್ನು ನವೆಂಬರ್ 24, 2017ರಲ್ಲಿ   ಯೋಗಿ ಆದಿತ್ಯನಾಥ್ ಅವರಿಗೆ ನೀಡಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com