ಭಾರತದ ಮೂರು ರಾಜ್ಯಗಳಿಂದ ಸಂಸತ್ ಗೆ ಆಯ್ಕೆಯಾಗಿದ್ದ ಏಕೈಕ ಮುತ್ಸದ್ದಿ ರಾಜಕಾರಣಿ ವಾಜಪೇಯಿ

ನವದೆಹಲಿಯಲ್ಲಿರುವ ಪ್ರಧಾನಿ ಗದ್ದುಗೆಗೆ ಉತ್ತರ ಪ್ರದೇಶವೇ ಮಾರ್ಗ ಎನ್ನುವುದು ರಾಷ್ಟ್ರ ರಾಜಕಾರಣದ ಸಿದ್ಧ ಸೂತ್ರ.
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ
Updated on
ನವದೆಹಲಿಯಲ್ಲಿರುವ ಪ್ರಧಾನಿ ಗದ್ದುಗೆಗೆ ಉತ್ತರ ಪ್ರದೇಶವೇ ಮಾರ್ಗ ಎನ್ನುವುದು ರಾಷ್ಟ್ರ ರಾಜಕಾರಣದ ಸಿದ್ಧ ಸೂತ್ರ. ಆದರೆ ದೇಶ ಕಂಡ ಕವಿ ಹೃದಯದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ರಾಜಕೀಯ ಜೀವನದಲ್ಲಿ ಮೂರು ಬೇರೆ ಬೇರೆ ರಾಜ್ಯಗಳಿಂದ ಸಂಸತ್ ಗೆ ಆಯ್ಕೆಯಾಗಿದ್ದರು.
ಅಜಾತಶತ್ರು ಎಂಬ ನಾಮಕ್ಕೆ ಅನ್ವರ್ಥರಾಗಿದ್ದ ಅಟಲ್ ಬಿಹಾರಿ ವಾಜಪೇಯಿ 1957 ರಲ್ಲಿ ನಡೆದ  2 ನೇ ಲೋಕಸಭೆ ಹಾಗೂ 1967 ರಲ್ಲಿ ನಡೆದ 4 ನೇ ಲೋಕಸಭೆಗೆ  ಆಯ್ಕೆಯಾಗಿದ್ದು ಉತ್ತರ ಪ್ರದೇಶದ ಬಲರಾಮಪುರದಿಂದ. 
ಇದಾದ ಬಳಿಕ 1971 ರಲ್ಲಿ ನಡೆದ 5 ನೇ ಲೋಕಸಭೆಗೆ ಕ್ಷೇತ್ರ ಬದಲಾವಣೆ ಮಾಡಿದ್ದ ವಾಜಪೇಯಿ ಅವರು ಮಧ್ಯಪ್ರದೇಶದ ಗ್ವಾಲಿಯರ್ ನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ನಂತರ 1977 ರಲ್ಲಿ ನಡೆದ 6 ನೇ ಲೋಕಸಭಾ ಚುನಾವಣೆಯಲ್ಲಿ ಹಾಗೂ 7 ನೇ ಲೋಕಸಭೆಗೆ  ನವದೆಹಲಿಯಿಂದ ಆಯ್ಕೆಯಾಗಿದ್ದರು. ನಂತರ 1991 ರಿಂದ 2004 ರಲ್ಲಿ ನಡೆದ ಉಳಿದ 7 ಲೋಕಸಭಾ ಚುನಾವಣೆಗಳಲ್ಲಿ ಲಖನೌ ದಿಂದ ಸ್ಪರ್ಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com