ವಾಜಪೇಯಿ ಆರೋಗ್ಯ ಮತ್ತಷ್ಟು ಕ್ಷೀಣ: ಜೊತೆಗಿದ್ದ ದಿನಗಳ ನೆನೆದು ಭಾವುಕರಾದ ಒಡಿಶಾ ಸಿಎಂ

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೊತೆಗಿದ್ದ ದಿನಗಳನ್ನು ನೆನೆದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾವುಕರಾದರು...
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ಭುವನೇಶ್ವರ್: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೊತೆಗಿದ್ದ ದಿನಗಳನ್ನು ನೆನೆದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾವುಕರಾದರು. 
ವಾಜಪೇಯಿ ಸ್ಥಿತಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಪಟ್ನಾಯಕ್ ಅವರು ಹಳೆಯ ದಿನಗಳನ್ನು ನೆನೆದು ಭಾವುಕರಾದರು. 
ವಾಜಪೇಯಿ ಅತ್ಯುತ್ತಮ ನಾಯಕ. ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಅತ್ಯುತ್ತಮವಾದ ಅನುಭವ. ಶೀಘ್ರದಲ್ಲಿಯೇ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತೇನೆಂದು ಹೇಳಿದ್ದಾರೆ. 
ನವೀನ್ ಪಟ್ನಾಯಕ್ ಹಾಗೂ ವಾಜಪೇಯಿಯವರು ಬಲವಾದ ರಾಜಕೀಯ ಬಾಂಧವ್ಯವನ್ನು ಹೊಂದಿದ್ದರು. ಪಟ್ನಾಯಕ್ ಅವರು ಬಿಜು ಜನತಾ ದಳ ಪಕ್ಷ, ವಾಜಪೇಯಿ ನೇತೃತ್ವದ ಎನ್'ಡಿಎ ಸರ್ಕಾರದೊಂದಿಗೆ ಕೈಜೋಡಿಸಿ 1998-2004ರವರೆಗೂ ಸರ್ಕಾರ ನಡೆಸಿತ್ತು. ವಾಜಪೇಯಿಯವರ ಸಂಪುಟದಲ್ಲಿ ಪಟ್ನಾಯಕ್ ಅವರು ಗಣಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com