ಅಯೋಧ್ಯ ವಿವಾದ : ಸುಪ್ರೀಂಕೋರ್ಟ್ ನಿಂದ 'ಅನುಕೂಲಕರ' ತೀರ್ಪಿನ ಭರವಸೆ- ಮೌರ್ಯ

ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ವಿಳಂಬವಾಗುತ್ತಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅನುಕೂಲಕರ ತೀರ್ಪಿನ ಭರವಸೆ ವ್ಯಕ್ತಪಡಿಸಿದ್ದಾರೆ.
ಕೇಶವ ಪ್ರಸಾದ್ ಮೌರ್ಯ
ಕೇಶವ ಪ್ರಸಾದ್ ಮೌರ್ಯ
Updated on

ಲಖನೌ:ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ವಿಳಂಬವಾಗುತ್ತಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ  ಅನುಕೂಲಕರ ತೀರ್ಪಿನ ಭರವಸೆ  ವ್ಯಕ್ತಪಡಿಸಿದ್ದಾರೆ.

ವಿವಾದ ಇತ್ಯಾರ್ಥಕ್ಕೆ ಎರಡು ಮಾರ್ಗೋಪಾಯಗಳನ್ನು ಅವರು ನೀಡಿದ್ದು,  ಪಾಲುದಾರರ ನಡುವಿನ ಮಾತುಕತೆ ಪ್ರಕ್ರಿಯೆ ಆರಂಭಿಸುವಂತೆ ಅಥವಾ ಸಂಸತ್ತಿನಲ್ಲಿ  ಕಾನೂನು ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಿಂದ ಅನುಕೂಲಕರ ತೀರ್ಪು ಹೊರಬರುವ ವಿಶ್ವಾಸವಿದೆ , ಜನರು ಕೂಡಾ ಅಂತಹುದೇ ವಿಶ್ವಾಸದಲ್ಲಿದ್ದಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ರಾಮ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಬಗ್ಗೆ  ಎಂದು ನನಗೆ ಖಚಿತವಿದೆ "ಎಂದು ಮೌರ್ಯ ಹೇಳಿದರು.

ಮೊಘಲ್ ಚಕ್ರವರ್ತಿ ಬಾಬರ್ ನಿಂದ   1528 ರಲ್ಲಿ ಬಾಬ್ರಿ ಮಸೀದಿ ಕಟಲ್ಪಟ್ಟಿದೆ. ರಾಮಮಂದಿರವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಡಿಸೆಂಬರ್ 6, 1996ರಲ್ಲಿ ಹಿಂದೂ ಕಾರ್ಯಕರ್ತರು ಮಸೀದಿಯನ್ನು ಧ್ವಂಸಗೊಳಿಸಿದರು. ಆಗಿನಿಂದಲೂ ಸುಪ್ರೀಂಕೋರ್ಟ್ ನಲ್ಲಿ ಅನೇಕ ಬಾರಿ ವಿಚಾರಣೆ ನಡೆಯುತ್ತಲೇ ಇದೆ. ಇನ್ನೂ ತೀರ್ಪು ಹೊರಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com