ಕೇರಳ ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್ 8 ರಿಂದಲೂ ಉಂಟಾದ ಭೀಕರ ಪ್ರವಾಹದಿಂದಾಗಿ 231 ಜನರು ಮೃತಪಟ್ಟಿದ್ದು, 32 ಜನರು ನಾಪತ್ತೆಯಾಗಿದ್ದಾರೆ. 3.91 ಲಕ್ಷ ಕುಟುಂಬಕ್ಕೆ ಸೇರಿದ ಸುಮಾರು 14.50 ಲಕ್ಷ ಜನರು ಇಂದಿಗೂ ರಾಜ್ಯದಾದ್ಯಂತ ತೆರಿದಿರುವ 3 879 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.