ಡೆಹ್ರಾಡೂನ್ : ಬಡಮಕ್ಕಳಿಗೆ ಶಿಕ್ಷಣ ಹೇಳಿಕೊಡುತ್ತಿದ್ದ ಎಟಿಎಂ ಭದ್ರತಾ ಸಿಬ್ಬಂದಿ ಕುರಿತು ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಮಾಡಿದ್ದ ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.
ವಿವಿಎಸ್ ಲಕ್ಷ್ಮಣ್ ಶುಕ್ರವಾರ ಬಡ ಮಕ್ಕಳಿಗೆ ಶಿಕ್ಷಣ ಹೇಳಿಕೊಡುತ್ತಿದ್ದ ಎಟಿಎಂ ಗಾರ್ಡ್ ನ ಎರಡು ಪೋಟೋಗಳನ್ನು ಟ್ವೀಟರ್ ನಲ್ಲಿ ಹಾಕಿದ್ದರು. ನಂತರ ಈ ಪೋಟೋಗಳಿಗೆ ಎಲ್ಲೆಡೆಗಳಿಂದ ಪ್ರೀತಿಯ, ಅಭಿಮಾನದ ಮಾತುಗಳು ಕೇಳಿಬರುತ್ತಿವೆ.
ನಿವೃತ್ತ ಸೈನಿಕ ಬ್ರಿಜೇಂದ್ರ ಸಿಂಗ್ ತಾನೂ ಕೆಲಸ ಮಾಡುವ ಎಟಿಎಂ ಹೊರಗಡೆ ಪ್ರತಿ ಸಂಜೆ ಬಡ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವ ಮೂಲಕ ದೇಶಕ್ಕಾಗಿ ಸೇವೆ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದರು.
Meet a true hero Brijendra , who works as a security guard at an ATM in Dehradun. Having retired from the army, he still continues to serve the nation, he teaches children from nearby slums in the evenings under the ATM lights. Salute to an incredible man
Advertisement