ಶನಿವಾರ ಲಖ್ನೋದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ದುರಂತವು ಆಮ್ಲಜನಕದ ಕೊರತೆಯಿಂದ ನಡೆದಿರಲಿಲ್ಲ. ಬದಲಿಗೆ ಆಸ್ಪತ್ರೆಯ ಆಂತರಿಕ ರಾಜಕೀಯದ ಪರಿಣಾಮವಾಗಿ ಸಂಭವಿಸಿತ್ತು ಎಂದು ಹೇಳಿದ್ದಾರೆ. 'ಘಟನೆಯ ಮಾಹಿತಿ ಪಡೆದ ಕೂಡಲೆ ನಾನು ಪ್ರಧಾನ ಆರೋಗ್ಯ ನಿರ್ದೇಶಕ, ಆರೋಗ್ಯ ಸಚಿನ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ ಮತ್ತು ನನಗೆ ಮಾಹಿತಿ ನೀಡುತ್ತಿರುವಂತೆ ತಿಳಿಸಿದೆ. ಮರುದಿನ ನಾನೇ ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಆಮ್ಲಜನಕದ ಕೊರತೆಯಿರಲಿಲ್ಲ ಎಂಬುದು ತಿಳಿದುಬಂತು. ಒಂದು ವೇಳೆ ಆಮ್ಲಜನಕದ ಕೊರತೆ ಇದ್ದಿದ್ದರೆ ಮೊದಲಿಗೆ ವೆಂಟಿಲೇಟರ್ ನಲ್ಲಿದ್ದ ಮಕ್ಕಳು ಸಾವನ್ನಪ್ಪ ಬೇಕಿತ್ತು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.