ಗೋಡ್ಸೆಗಿಂತ ಮೊದಲು ಹುಟ್ಟಿದ್ದರೆ ಮಹಾತ್ಮಾ ಗಾಂಧಿಯನ್ನು ನಾನೇ ಕೊಲ್ಲುತ್ತಿದ್ದೆ: ಪೂಜಾ

ನಾಥುರಾಮ್ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೇ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ನನ್ನ ಕೈಯಾರ ನಾನೇ ಕೊಲ್ಲುತ್ತಿದೆ ಎಂದು ಅಖಿಲ ಭಾರತೀಯ ಹಿಂದೂ...
ಪೂಜಾ ಶಕುನ್ ಪಾಂಡೆ
ಪೂಜಾ ಶಕುನ್ ಪಾಂಡೆ
Updated on
ಆಲಿಘಡ: ನಾಥುರಾಮ್ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೇ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ನನ್ನ ಕೈಯಾರ ನಾನೇ ಕೊಲ್ಲುತ್ತಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ(ಎಬಿಎಚ್ಎಂ) ರಾಷ್ಟ್ರೀಯ ಕಾರ್ಯದರ್ಶಿ ಡಾ. ಪೂಜಾ ಶಕುನ್ ಪಾಂಡೆ ಹೇಳಿದ್ದಾರೆ. 
ಉತ್ತರ ಪ್ರದೇಶದ ಮೀರತ್ ನಲ್ಲಿ ದೇಶದ ಮೊದಲ ಹಿಂದೂ ನ್ಯಾಯಾಲಯ ಸ್ಥಾಪಿಸಿ ಸ್ವಯಂ ಘೋಷಿತ ನ್ಯಾಯಾಧೀಶೆ ಆಗಿರುವ ಪೂಜಾ ಮಹಾತ್ಮ ಗಾಂಧಿ ದೇಶವನ್ನು ವಿಭಜನೆ ಮಾಡಿ ಲಕ್ಷಾಂತರ ಹಿಂದೂಗಳ ಹತ್ಯೆಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ. 
ಸ್ವತಂತ್ರ ಭಾರತದಲ್ಲಿ ಮತ್ತೆ ಯಾರಾದರೂ ಮಹಾತ್ಮರಾಗಲೂ ಯತ್ನಿಸಿದರೆ ಅವರನ್ನು ಕೊಲ್ಲುವುದಾಗಿ ಪೂಜಾ ಶಕುನ್ ಪಾಂಡೆ ಅವರು ಗಾಂಧಿ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 
ನಾಥುರಾಮ್ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದು ಕರೆದಿರುವ ಪಾಂಡೆ, ಮಹಾತ್ಮಾ ಗಾಂಧಿಯನ್ನು ಶ್ಲಾಘಿಸಿ, ಗೋಡ್ಸೆಯನ್ನು ರಾಕ್ಷಸರಂತೆ ಬಿಂಬಿಸುವ ಇತಿಹಾಸವನ್ನು ಇಂದಿನ ಪೀಳಿಗೆಗೆ ಹೇಳಿಕೊಡಲಾಗುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com