1999ರಲ್ಲಿ ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಕಾರ್ಗಿಲ್ ಯುದ್ಧ ಜುಲೈ ವರೆಗೂ ನಡೆದಿತ್ತು. ಭಾರತೀಯ ಸೇನೆಯ ಬಂಕರ್ ಗಳನ್ನು ವಶಪಡಿಸಿಕೊಂಡಿದ್ದ ಪಾಕ್ ಸೇನೆ ಉದ್ಧಟತನ ಮೆರೆದು ಭಾರತಕ್ಕೆ ಯುದ್ಧಾಹ್ವಾನ ನೀಡಿತ್ತು. ಅಂದು ಪಾಕಿಸ್ತಾನದ ಪಂಥಾಹ್ವಾನವನ್ನು ಸ್ವೀಕರಿಸಿದ್ದ ಭಾರತ ಯಶಸ್ವಿಯಾಗಿ ಕಾರ್ಗಿಲ್ ಬೆಟ್ಟವನ್ನು ತನ್ನ ವಶಕ್ಕೆ ಪಡೆದಿತ್ತು. ಆದರೆ ಅಂದು ಸೇನಾಧಿಕಾರಿಗಳಾದ ವಿಕ್ರಮ ಬಾತ್ರಾ, ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್, ಪದ್ಮಪನಿ ಆಚಾರ್ಯ, ಸಂಜಯ್ ಕುಮಾರ್, ಸೌರಭ್ ಕಾಲಿಯಾ, ಅನೂಜ್ ನಾಯರ್ ಸೇರಿದಂತೆ ಒಟ್ಟು 453 ಭಾರತೀಯ ಯೋಧರು ಹುತಾತ್ಮರಾಗಿ, 1500ಕ್ಕೂ ಅಧಿಕ ಸೈನಿಕರ ಗಾಯಗೊಂಡಿದ್ದರು.