ಗುಜರಾತ್ ಮೂಲದ ಉದ್ಯಮಿ ಜಯೇಶ್ ಟೈಲರ್ ತಮ್ಮ ಕಾರಿನಲ್ಲಿ ಸಿಲುಕಿಕೊಂಡಿದ್ದ ಬೆಕ್ಕನ್ನು ಕಾಪಾಡುವ ಸಲುವಾಗಿ ತಮ್ಮ ಕಾರನ್ನು ಹಾಳು ಮಾಡಿದ್ದಾರೆ. ಜಯೇಶ್ ತಮ್ಮ ಕುಟುಂಬದ ಜತೆಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ತಮ್ಮ ಕಾರಿನ ಯಾವುದೋ ಮೂಲೆಯಲ್ಲಿ ಬೆಕ್ಕಿನ ಮರಿಯೊಂದು ಮಿಯಾಂವ್ ಎಂದು ಕೂಗಿದ್ದು ಜಯೇಶ್ ಗೆ ಕೇಳಿಸಿತ್ತು.