ಪಕ್ಷದ ವಿರುದ್ಧವೇ ಸಂಸದೆ ಸಾವಿತ್ರಿ ಬಾಯಿ ಫುಲೆ ಕೆಂಡಾಮಂಡಲರಾಗಿದ್ದು, ಬಿಜೆಪಿ ವಿರುದ್ಧ ಸಮಾಜದಲ್ಲಿ ಒಡಕುಂಟುಮಾಡುತ್ತಿರುವ ಆರೋಪ ಮಾಡಿದ್ದಾರೆ. " ನಾನು ಬಿಜೆಪಿಯನ್ನು ಇಂದು ತೊರೆಯುತ್ತಿದ್ದೇನೆ ಸಂವಿಧಾನವನ್ನು ಕೊನೆಗಾಣಿಸಿ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನೂ ಕೊನೆಗಾಣಿಸುವ ಪಿತೂರಿ ನಡೆಯುತ್ತಿದೆ ಎಂದು ಸಾವಿತ್ರಿ ಬಾಯಿ ಫುಲೆ ಗಂಭೀರ ಆರೋಪ ಮಾಡಿದ್ದಾರೆ.