ಇದೇ ವೇಳೆ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಹುಟ್ಟಿನಿಂದಲೇ ಯೋಗಿ ಅವರಂತೆ ಕೇವಲ ಭಾರತೀಯನಷ್ಟೇ ಅಲ್ಲ, ಆಯ್ಕೆಯಲ್ಲೂ ನಾನು ಭಾರತೀಯನೇ. ಜಿನ್ಹಾ ಸಿದ್ಧಾಂತವನ್ನು ನಾವು ತಿರಸ್ಕರಿಸಿದ್ದೇವೆ. ಭಾರತವನ್ನು ನಮ್ಮ ಭೂಮಾತೆಯೆಂದು ಒಪ್ಪಿಕೊಂಡಿದ್ದೇವೆ. ಸೆಕೆಂಡ್ ಕ್ಲಾಸ್ ನಾಗರೀಕರಂತೆ ನೀವು ನಮ್ಮೊಂದಿಗೆ ನಡೆದುಕೊಳ್ಳಬಾರದು ಎಂದು ಹೇಳಿದ್ದಾರೆ.