ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಮುಂಬೈ ಮೇಲಿನ ದಾಳಿ ಭಯೋತ್ಪದಾಕ ದಾಳಿಯಾಗಿದ್ದು, ಭಯೋತ್ಪಾದನೆ ನಿರ್ಮೂಲನೆಗೊಳಿಸುವುದು ಪಾಕಿಸ್ತಾನದ ಹಿತಾಸಕ್ತಿಗೆ ಬಿಟ್ಟಿದ್ದು. ಮುಂಬೈ ಮೇಲೆ ಯಾರು ದಾಳಿ ಮಾಡಿದ್ದರು ಎಂಬುದು ಇಡೀ ವಿಶ್ವ ಸಮುದಾಯಕ್ಕೆ ತಿಳಿದಿದೆ. ಇದರ ಹೊರತಾಗಿಯೂ ನಮಗೂ ಗೊತ್ತಿದೆ ದಾಳಿ ಯಾರು ನಡೆಸಿದ್ದರು ಎಂಬುದು. ಆದರೂ, ದಾಳಿ ನಡೆಸಿರುವುದರ ಕುರಿತು ಪಾಕಿಸ್ತಾನ ಒಪ್ಪಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.