ಅಗತ್ಯಬಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ: ಲೆ.ಜ.ದೇವರಾಜ್ ಅಂಬು

ಅಗತ್ಯಬಿದ್ದರೆ ಉಗ್ರರ ವಿರುದ್ದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಲು ಭಾರತೀಯ ಸೇನೆಂ ಹಿಂಜರಿಯುವುದಿಲ್ಲ ಎಂದು ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇವರಾಜ್ ಅಂಬು...
ಲೆ.ಜ.ದೇವರಾಜ್ ಅಂಬು
ಲೆ.ಜ.ದೇವರಾಜ್ ಅಂಬು
ಡೆಹ್ರಾಡೂನ್: ಅಗತ್ಯಬಿದ್ದರೆ ಉಗ್ರರ ವಿರುದ್ದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಲು ಭಾರತೀಯ ಸೇನೆಂ ಹಿಂಜರಿಯುವುದಿಲ್ಲ ಎಂದು ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇವರಾಜ್ ಅಂಬು ಅವರು ಹೇಳಿದ್ದಾರೆ. 
ಡೆಹ್ರಾಡೂನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆ ಬಳಿ ಉಗ್ರ ಕೇಂದ್ರಗಳ ಮೇಲೆ ನಡೆಸಲಾಗಿದ್ದ ಸೀಮಿತ ದಾಳಿ ಸೇನೆಯ ಸಾಮರ್ಥ್ಯವನ್ನು ತೋರಿಸಿದೆ. ಶತ್ರುಗಳು ಸವಾಲು ಎಸೆದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ನಾವು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. 
ಸೆ.29 2016ರಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com