ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ ಠಾಕ್ರೆಯವರು, ಗುಜರಾತ್ ನಲ್ಲಿ ರಾಹುಲ್ ಒಬ್ಬರೇ ಇದ್ದರು, ಕರ್ನಾಟಕದಲ್ಲೂ ಒಂಟಿಯಾಗಿಯೇ ಇದ್ದರು. ಇದೀಗ ಪಪ್ಪು ಕೆಲವರಿಗೆ ಪರಮ ಪೂಜ್ಯರಾಗಿ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲೂ ಅವರ ನಾಯಕತ್ವನ್ನು ಒಪ್ಪಿಕೊಳ್ಳುತ್ತಾರಾ? ಅದನ್ನು ನೋಡೋಣ ಎಂದು ಹೇಳಿದ್ದಾರೆ.