ಎಲ್ಲಾ ವರ್ಗದವರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ನಮ್ಮ ಪಕ್ಷ ಎಲ್ಲಾ ವರ್ಗದವರ ಜೊತೆಗೂ ಇರಲಿದೆ. ಇದು ರೈತರ, ಯುವಕರ ಗೆಲುವು. ಉದ್ಯೋಗ ನೀಡುವ ಭರವಸೆಯನ್ನು ಮೋದಿ ಸುಳ್ಳು ಮಾಡಿದ್ದಾರೆ. ರೈತರ ವಿಷಯದಲ್ಲೂ ಮೋದಿ ಭರವಸೆ ಈಡೇರಿಸಿಲ್ಲ. ನಾವು ಈ ವಿಷಯಗಳನ್ನು ಜನರ ಮುಂದಿಡುತ್ತೇವೆ. ದೇಶದ ಪ್ರಮುಖ ಸಮಸ್ಯೆಗಳನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತೇವೆ. ಉದ್ಯೋಗ, ರೈತರು ಮತ್ತು ಭ್ರಷ್ಟಾಚಾರದ ವಿಚಾರದ ಮೇಲೆ ಮೋದಿ ಅಧಿಕಾರಕ್ಕೆ ಬಂದರೂ, ಅದನ್ನು ಈಡೇರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಮೋದಿ ಖುದ್ದು ಭ್ರಷ್ಟ. ರಫೇಲ್ ಹಗರಣದಲ್ಲಿ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರದಿಂದಲೇ ಉತ್ತರಪ್ರದೇಶ, ಗುಜರಾತ್ ಗೆದ್ದಿದಾರೆ. ನಮ್ಮ ಸರ್ಕಾರ ರಚನೆಯಾದ ತಕ್ಷಣದಿಂದಲೇ ರೈತರ ಸಾಲಮನ್ನಾ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದರು.