ಇನ್ನು ಎರಡನೇಯದ್ದಾಗಿ ಮೂರು ರಾಜ್ಯಗಳ ಚುನಾವಣೆ ಸೋಲಿನಿಂದ ಉಂಟಾಗಿರುವ ಜನಾಭಿಪ್ರಾಯವನ್ನು ಇನ್ನಾರು ತಿಂಗಳಲ್ಲಿ ಬದಲಾವಣೆ ಮಾಡಬೇಕಿರುವ ಅನಿವಾರ್ಯತೆ ಇದ್ದು, ಆರ್ ಬಿಐ ನ ಸಹಾಯದಿಂದ ಕೃಷಿ ಸಮಸ್ಯೆ, ನಗರ ಉದ್ಯೋಗಗಳಲ್ಲಿ ದುರ್ಬಲ ಬೆಳವಣಿಗೆಯ ವಿಷಯಗಳನ್ನು ಬಗೆಹರಿಸಬೇಕಿದೆ. ಇತ್ತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಇತ್ಯರ್ಥಗೊಳ್ಳದೇ, ಸಾಲವನ್ನ ಪೂರ್ಣ ಸಂಗ್ರಹಿಸುವರೆಗೆ ಯಾರಿಗೂ ಮರು ಸಾಲ ಕೊಡುವ ಹಾಗಿಲ್ಲ ಎಂದು ಆರ್ ಬಿಐ ನಿರ್ಬಂಧ ವಿಧಿಸಿದೆ. ಇಂತಹ ಕಠಿಣ ನಡೆಯಿಂದ ವ್ಯಾಪಾರ ಉದ್ದಿಮೆ ಕುಸಿಯುತ್ತದೆ ಎನ್ನುತ್ತದೆ. ತಾವು ತೆಗೆದುಕೊಂಡ ಸಾಲದ 80 ಪ್ರತಿಶತ ಸಾಲವನ್ನ ತೀರಿಸಿದವರನ್ನ ಸುಸ್ತಿದಾರ ಎನ್ನಲಾಗುವುದಿಲ್ಲ ಅಂತವರಿಗೆ ಮರುಸಾಲ ಕೊಟ್ಟರೆ ಉದ್ಯಮ ಚೇತರಿಸಿಕೊಂಡು ಅವರು ತಮ್ಮ ಸಾಲವನ್ನ ಪೂರ್ಣ ವಾಪಸ್ಸು ಕೊಡಲು ಸಾಧ್ಯ ಎನ್ನುವುದು ಕೇಂದ್ರದ ನಿಲುವು. ಈ ವಿಷಯವಾಗಿ ಹಾಗೂ ಆರ್ ಬಿಐ ನ ಸೆಕ್ಷನ್ 7 ವಿಷಯವಾಗಿ ಉರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಹೊಸ ಆರ್ ಬಿಐ ಗೌರ್ನರ್ ನ್ನು ಮುಂದಿಟ್ಟುಕೊಂಡು ಮೋದಿ 2019 ಕ್ಕೆ ಪೂರಕವಾಗುವ ರೀತಿಯಲ್ಲಿ ಆರ್ ಬಿಐ ನ್ನು ನಿರ್ವಹಣೆ ಮಾಡಿವುದರ ಬಗ್ಗೆ ಕುತೂಹಲ ಮೂಡಿದ್ದು ಹೂಡಿಕೆದಾರರಲ್ಲಿ ಆತಂಕವೂ ಮೂಡಿದೆ.