ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್, ಸಿಖ್ ವಿರೋಧಿ ದಂಗೆ ನಡೆದ ನಂತರ 1991 ಹಾಗೂ ಅನೇಕ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಯಾರೊಬ್ಬರೂ ಏನನ್ನೂ ಹೇಳಿಲ್ಲ. ನನ್ನ ವಿರುದ್ಧ ಯಾವುದೇ ಪ್ರಕರಣವಾಗಲೀ , ಎಫ್ ಐಆರ್ , ಚಾರ್ಚ್ ಶೀಟ್ ದಾಖಲಾಗಿಲ್ಲ. ಈಗ ಪ್ರತಿಪಕ್ಷದವರು ಈ ವಿಚಾರ ಎತುತ್ತಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಯಾವುದೇ ಪ್ರತ್ಯೇಕ್ಷದರ್ಶಿಗಳಿದ್ದರೆ ಹೇಳಲಿ ಎಂದು ಪ್ರಶ್ನಿಸಿದರು.