ಲೋಕಸಭೆಯಲ್ಲಿ ಇಂದು ತ್ರಿವಳಿ ತಲಾಕ್ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಖ್ವಿ, ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಈ ಸರ್ಕಾರ ಬದ್ಧವಾಗಿದೆ. ಶರಿಯಾ ಕಾನೂನಿನಲ್ಲೂ ತ್ರಿವಳಿ ತಲಾಕ್ ಅವಕಾಶ ಇಲ್ಲ. ಹೀಗಾಗಿ ತ್ರಿವಳಿ ತಲಾಕ್ ನಿಶೇಧಿಸಲಾಗುತ್ತಿದೆ. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.