ಇದರಿಂದ ಕುಪಿತನಾದ ದೀಪು ನವೆಂಬರ್ 6 ರಂದು ಪೇರುವನ್ನಾಮುಜಿ ಪೊಲೀಸ್ ಠಾಣೆಯಲ್ಲಿ ತನ್ನ ಗೆಳತಿ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಆದರೆ ಪೋಲೀಸರು ಆತನ ದೂರು ಸ್ವೀಕರಿಸಲಿಲ್ಲ. ನೀವು ನಿಮ್ಮ ಕುಟುಂಬದವರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಮುನ್ನ ತಾನು ಗೆಳತಿಯೊಡನೆ ಮಾತನಾಡಿರುವುದಾಗಿ ದೀಪು ಹೇಳಿದ್ದಾಗ ಪೋಲೀಸರು ಆ ಗೆಳತಿಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ನಮ್ಮ ನಡುವೆ ಅಂತಹಾ ಮಾತುಕತೆ ನಡೆದಿಲ್ಲ, ಅರ್ಚನಾ ಏಕೆ ಲಿಂಗಪರಿವರ್ತನೆ ಮಾಡಿಸಿಕೊಂಡಳು, ಅವಳ ಲಿಂಗಪರಿವರ್ತನೆ ವಿಚಾರವೇ ನನಗೆ ಗೊತ್ತಿಲ್ಲ ಎಂದು ಆಕೆ ಉತ್ತರಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ ದೀಪು ತಾನು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಗೆಳತಿಯು ತನ್ನ ಪೋಷಕರ ಒತ್ತಡದಿಂದ ಇಂತಹ ಉತ್ತರ ನೀಡಿದ್ದಾಳೆ ಎಂದು ವಾದಿಸಿದ್ದಾರೆ.