ಈ ಮಧ್ಯೆ, ಶಾಲಾ ಆಡಳಿತ ಮಂಡಳಿಯವರು ತುಷಾರ್ನ ಸಾವಿಗೆ ಬೇರೆಯ ಕಾರಣ ನೀಡಿದ್ದು, ತುಷಾರ್ ಡಯೋರಿಯಾದಿಂದ ಬಳಲುತ್ತಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆದರೆ ತುಷಾರ್ ಪೋಷಕರು ಸಹಪಾಠಿ ವಿದ್ಯಾರ್ಥಿಗಳು ತಮ್ಮ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.