ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಉತ್ತಮ ವೈದ್ಯರು ಆದರೆ, ಮೋದಿ ಸರ್ಕಾರ ಭಯಾನಕ ರೋಗಿ: ಚಿದಂಬರಂ

ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಪಿ ಚಿದಂಬರಂ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅತ್ಯುತ್ತಮ ವೈದ್ಯರು...
ಚಿದಂಬರಂ
ಚಿದಂಬರಂ
Updated on
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಪಿ ಚಿದಂಬರಂ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಅತ್ಯುತ್ತಮ ವೈದ್ಯರು, ಆದರೆ ಮೋದಿ ಸರ್ಕಾರ ಭಯಾನಕ ರೋಗಿ ಎಂದು ಲೇವಡಿ ಮಾಡಿದ್ದಾರೆ. 
ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ, ಆದರೆ ಮೋದಿ ಸರ್ಕಾರ ತನ್ನ ಸಮಸ್ಯೆಯನ್ನು ತಾನೆ ನಿರ್ಣಯ ಮಾಡಿಕೊಳ್ಳುತ್ತದೆ. 
ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್ ಅವರು ಅತ್ಯುತ್ತಮ ವೈದ್ಯರು ಆದರೆ ಎನ್ ಡಿಎ ಸರ್ಕಾರವೇ ಭಯಾನಕ ರೋಗಿಯಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. 
ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ. ಕೃಷಿ ಸಮಸ್ಯೆಯನ್ನು ನಿರಾಕರಿಸುತ್ತದೆ, ಉದ್ಯೋಗ ಸಮಸ್ಯೆಯನ್ನು ಒಪ್ಪಿಕೊಳ್ಳುವುದಿಲ್ಲ, ಪ್ರತಿಪಕ್ಷಗಳ ವಾದವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಓರ್ವ ಭಯಾನಕ ರೋಗಿ ಔಷಧ ತೆಗೆದುಕೊಳ್ಳದೇ ತನ್ನದೇ ನಿರ್ಣಯಗಳನ್ನು ತಾನೇ ತೆಗೆದುಕೊಳ್ಳುತ್ತಾನೆ, ಅಂತೆಯೇ ಅರವಿಂದ್ ಸುಬ್ರಹ್ಮಣಿಯನ್ ಅವರು ಅತ್ಯುತ್ತಮ ವೈದ್ಯರಾದರೂ ಮೋದಿ ಸರ್ಕಾರ ಭಯಾನಕ ರೋಗಿ ಇದ್ದಂತೆ ಎಂದು ಚಿದಂಬರಂ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com