ಹೈದರಾಬಾದ್: ಐತಿಹಾಸಿಕ ಮಹತ್ವವುಳ್ಳ ಮೂರು ಕೋಟಿ ರೂ. ಮೌಲ್ಯದ 3 ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅವರು ಕಳವು ಮಾಡಿದ್ದ ಮೂರೂ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿನ ದೇವಾಲಯದಿಂದ ಜ.27ರಂದು ದುಷ್ಕರ್ಮಿಗಳು ಈ ವಿಗ್ರಹಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಹೈದರಾಬಾದ್ ಮತ್ತು ಕಾಮರೆಡ್ಡಿ ಪೋಲೀಸರು ಜಂಟಿಯಾಗಿ ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಲೀಸರು ವಶಕ್ಕೆ ಪಡೆದಿರುವ ಈ ಪಂಚಲೋಹ ವಿಗ್ರಹಗಳು 600 ವರ್ಷಗಳಷ್ಟು ಪುರಾತನವಾದದ್ದು ಎಂದು ಕಂಡುಬಂದಿದ್ದು ಬಂಧಿತರು ಈ ಹಿಂದೆ ಸಹ ದೇವಾಲಯಗಳಿಂದ ವಿಗ್ರಹ ಕಳವು ಮಾಡಿದ ಹಲವು ಪ್ರಕರಣಗಗಳಲ್ಲಿ ಭಾಗಿಯಾಗಿದ್ದರು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ವಿ. ಶ್ರೀನಿವಾಸ ರಾವ್ ಹೇಳಿದರು.
#Hyderabad: Police recovers 3 antique panchaloha idols today & arrested 2 people. Idols were stolen from temples in Kamareddy town on 27 January & are worth Rs 3 crore. pic.twitter.com/FFxgzxPxBc
ಕಳವು ಮಾಡಿದ ನಂತರ ವಿಗ್ರಹ ಚೋರರು ಕರ್ನಾಟಕಕ್ಕೆ ಆಗಮಿಸುತ್ತಿದ್ದು ಕೆಲ ದಿನಗಳ ಬಳಿಕ ಮತ್ತೆ ಹೈದರಾಬಾದ್ ಗೆ ವಾಪಾಸಾಗಿ ವಿಗ್ರಹ ಮಾರಾಟ ನಡೆಸುತ್ತಿತ್ತು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.