ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, 2014ರ ಲೋಕಸಭಾ ಚುನಾವಣೆ ದೇಶದ ಜನರ ಐತಿಹಾಸಿಕ ತೀರ್ಪಾಗಿತ್ತು. ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿಟ್ಟ ಮತದಾರರು, ದಾಖಲೆ ಪ್ರಮಾಣದಲ್ಲಿ ಬಿಜೆಪಿ ಆಶೀರ್ವಧಿಸಿದ್ದರು. ಜನ ಈ ಹಿಂದಿನ ಸರ್ಕಾರಗಳ ಪೊಳ್ಳು ಭರವಸೆಯಿಂದ ಬೇಸತ್ತು, ತ್ವರಿತಗತಿಯ ಅಭಿವೃದ್ಧಿಗೆ ಹಾತೊರೆಯುತ್ತಿದ್ದರು. ಅವರ ಪ್ರಶ್ನೆಗೆ ಬಿಜೆಪಿ ಉತ್ತರವಾಗಿ ಕಂಡಿತ್ತು. ತನ್ನದೇ ಸ್ವಂತಬಲಹೊಂದಿದ್ದರೂ ಬಿಜೆಪಿ ಪಕ್ಷ ತನ್ನ ಮಿತ್ರ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸರ್ಕಾರ ರಚನೆ ಮಾಡಿತ್ತು. ಬಡವರ ಕಲ್ಯಾಣ ಈ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ರೈತರ ಅಭಿವೃದ್ಧಿ ಸರ್ಕಾರದ ಧ್ಯೇಯೋದ್ದೇಶವಾಗಿದೆ. ರೈತರು ಮತ್ತು ಬಡವರ ಕಲ್ಯಾಣಕ್ಕಾಗಿ ಸರ್ಕಾರ ಕಾರ್ಯನಿರತವಾಗಿದೆ.