ತಾಜ್ ಮಹಲ್ ರಕ್ಷಣೆಗಾಗಿ ವಿಷನ್ ಡಾಕ್ಯುಮೆಂಟ್ ನೀಡಿ, ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಐತಿಹಾಸಿಕ ಪ್ರೇಮ ಸೌಧ ತಾಜ್ ಮಹಲ್ ಸ್ಮಾರಕ ರಕ್ಷಣೆ ಸಂಬಂಧ ಮಿಷನ್ ಡಾಕ್ಯುಮೆಂತ್ ಒಂದನ್ನು ನಾಲ್ಕು ವಾರಗಳಲ್ಲಿ ರಚಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಇಂದು ನಿರ್ದೇಶಿಸಿದೆ.
ತಾಜ್ ಮಹಲ್
ತಾಜ್ ಮಹಲ್
Updated on
ನವದೆಹಲಿ: ಐತಿಹಾಸಿಕ ಪ್ರೇಮ ಸೌಧ ತಾಜ್ ಮಹಲ್ ಸ್ಮಾರಕ ರಕ್ಷಣೆ ಸಂಬಂಧ ಮಿಷನ್ ಡಾಕ್ಯುಮೆಂತ್ ಒಂದನ್ನು ನಾಲ್ಕು ವಾರಗಳಲ್ಲಿ ರಚಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಇಂದು ನಿರ್ದೇಶಿಸಿದೆ.
ತಾಜ್ ಮಹಲ್ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಾಟನೆಗಳು ಹಾಗೂ ಅಲ್ಲಿ ಬೆಳೆಯುತ್ತಿರುವ ಚರ್ಮ ಉದ್ಯಮ, ಹೋಟೆಲ್ ಗಳ ಬಗೆಗೆ ವಿವರಣೆ ಕೊಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನ್ಯಾಯಮೂರ್ತಿ ಎಂ. ಬಿ. ಲೊಕುರ್​ ವರನ್ನೊಳಗೊಂಡ ನ್ಯಾಯಪೀಠ ಈ ನಿರ್ದೇಶನ ನಿಡಿದ್ದು ಈ ಸಂಬಂಧ ಉತ್ತರ ಪ್ರದೇಶದ ಪ್ರತಿನಿಧಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್​ ಮೆಹ್ತಾ ಅವರನ್ನು ಪ್ರಶ್ನಿಸಿದಾಗ ಅವರು ಈ ವಿಚಾರವನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭ್ರವಸೆ ನೀಡಿದ್ದಾರೆ.
ಇದೇ ವೇಳೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಆಗ್ರಾ ಪಟ್ಟಣದಲ್ಲಿ ಪೈಪ್​ಲೈನ್​ ಅಳವಡಿಸುವುದಕ್ಕಾಗಿ ಸುಮಾರು 234 ಮರಗಳನ್ನು ಕತ್ತರಿಸಲು ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು ಟ್ರೆಪೆಜಿಯಮ್ ವಲಯದಲ್ಲಿ ನೀವು ಎಷ್ಟು ಸಸಿಗಳನ್ನು ನೆಟ್ಟಿದ್ದೀರಎಂದು ಪ್ರಶ್ನಿಸಿದ್ದು ಈ ನಾಲ್ಕು ವಾರಗಳ ನಂತರ ವಿಚಾರಣೆ ನಡೆಸಲಾಗುವುದು ಎಂದಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com