ಡಾರ್ವಿನ್ ಸಿದ್ಧಾಂತವನ್ನು ಪಠ್ಯದಿಂದ ತೆಗೆಯುವ ಉದ್ದೇಶವಿಲ್ಲ: ಮಾನವ ಸಂಪನ್ಮೂಲ ಇಲಾಖೆ

ಚಾರ್ಲ್ಸ್ ಡಾರ್ವಿನ್ ನ ವಿಕಾಸ ಸಿದ್ಧಾಂತವನ್ನು ಪಠ್ಯದಿಂದ ತೆಗೆಯುವ ಉದ್ದೇಶವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.
ಮಾನವ ಸಂಪನ್ಮೂಲ ಇಲಾಖೆ
ಮಾನವ ಸಂಪನ್ಮೂಲ ಇಲಾಖೆ
ನವದೆಹಲಿ: ಚಾರ್ಲ್ಸ್ ಡಾರ್ವಿನ್ ನ ವಿಕಾಸ ಸಿದ್ಧಾಂತವನ್ನು ಪಠ್ಯದಿಂದ ತೆಗೆಯುವ ಉದ್ದೇಶವಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೇಳಿದೆ. 
ಡಾರ್ವಿನ್ ನ ವಿಕಾಸ ಸಿದ್ಧಾಂತ 12 ನೇ ತರಗತಿಯ ವಿದ್ಯಾರ್ಥಿಗಳ ಪಠ್ಯದ ಭಾಗವಾಗಿದೆ ಎಂದು ಹೆಚ್ ಆರ್ ಡಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾನವ ಸಂಪನ್ಮೂಲ ಇಲಾಖೆಗೆ ಡಾರ್ವಿನ್ ನ ವಿಕಾಸವಾದದ ಸಿದ್ಧಾಂತವನ್ನು ಪಠ್ಯದಿಂದ ತೆಗೆದುಹಾಕಬೇಕೆಂಬ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com