ಉತ್ತರ ಪ್ರದೇಶ: ವಿವಾಹ ಸಂಭ್ರಮಕ್ಕಾಗಿ ನಡೆಸಿದ ಫೈರಿಂಗ್ ನಿಂದ ಯೋಧ ಸಾವು

ವಿವಾಹ ಕಾರ್ಯಕ್ರಮವೊಂದರಲ್ಲಿ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಯೋಧ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶ: ವಿವಾಹ ಸಂಭ್ರಮಕ್ಕಾಗಿ ನಡೆಸಿದ ಫೈರಿಂಗ್ ನಿಂದ ಯೋಧ ಸಾವು
ಉತ್ತರ ಪ್ರದೇಶ: ವಿವಾಹ ಸಂಭ್ರಮಕ್ಕಾಗಿ ನಡೆಸಿದ ಫೈರಿಂಗ್ ನಿಂದ ಯೋಧ ಸಾವು
Updated on
ಕಾನ್ಪುರ: ವಿವಾಹ ಕಾರ್ಯಕ್ರಮವೊಂದರಲ್ಲಿ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡಿನಿಂದ ಯೋಧ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದದ ಶ್ಯಾಮ್ ನಗರದಲ್ಲಿ ಈ ದುರ್ಘಟನೆ ಸಂಬವಿಸಿಎ ಎಂದು ಪೋಲೀಸರು ತಿಳಿಸಿದ್ದಾರೆ.
ಕುಲ್ದೀಪ್ ದೀಕ್ಷಿತ್, ಮೃತ ಸೈನಿಕನಾಗಿದ್ದು ತನ್ನ ಸ್ನೇಹಿತ, ಶಿವ ಪ್ರಕಾಶ್ ವಿವಾಹದಲ್ಲಿ ಭಾಗವಹಿಸಿದ್ದ ವೇಳೆ ಸಂಭ್ರಮಾಚರಣೆ ಅಂಗವಾಗಿ ನಡೆದ ಫೈರಿಂಗ್ ವೇಳೆ ತನ್ನ ಪರವಾನಗಿ ಹೊಂದಿದ್ದ ಪಿಸ್ತೂಲಿನಿಂದ ಹಾರಿದ್ದ ಗುಂಡು ತಗುಲಿ ಮೃತಪಟ್ಟಿದ್ದಾನೆ.  ಅತಿಥಿಗಳು ಸಂಭ್ರಮದ ನೃತ್ಯವಾಡುತ್ತಿದ್ದಾಗ ಮೃತನ ಇನ್ನೊಬ್ಬ ಸ್ನೇಹಿತ, ಸಂಜಯ್ ಮೌರ್ಯ ಗಾಳಿಯಲ್ಲಿ ಅನೇಕ ಸುತ್ತು ಗುಂಡು ಹಾರಿಸಿದ್ದನು. ಅದರಲ್ಲಿ ಒಂದು ಗುಂಡು ಆಕಸ್ಮಿಕವಾಗಿ ದೀಕ್ಷಿತ್ ಹೊಟ್ಟೆಯನ್ನು ಹೊಕ್ಕಿತ್ತು ಎಂದು ಪೋಲೀಸ್ ಅಧೀಕ್ಷಕ (ಪೂರ್ವ) ಅನುರಾಗ್ ಆರ್ಯ ಹೇಳಿದ್ದಾರೆ.
ತಕ್ಷಣ ದೀಕ್ಷಿತ್ ನನ್ನು ಕಾನ್ಶಿರಾಂ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಅಲ್ಲಿನ ವೈದ್ಯರು ಯೋಧನು ಅದಾಗಲೇ ಮರಣವನ್ನಪ್ಪಿದ್ದಾನೆಂದು ದೃಢಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com