ಪತಿ ಸಾವಿನ ಬಳಿಕ ಖಿನ್ನತೆಗೊಳಗಾಗಿದ್ದ ಸಂಗೀತಾ ಬಳಿಕ ಸುಧಾರಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಬ್ಯಾಂಕ್ ಪರೀಕ್ಷೆ ಕಟ್ಟಿ ತೇರ್ಗಡೆಯಾಗಿದ್ದರು. ಡೆಹರಾಡೂನ್ ನಲ್ಲಿ ವಾಸ್ತವ್ಯವಿದ್ದ ಸಂಗೀತಾಗೆ ಒಂದು ದಿನ ರಾಣಿಖೇತ್ ಸೆಂಟ್ರಲ್ ಕಮಾಂಡ್ ನ ಒಂದು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೇನೆಯಿಂದ ದೂರವಾಣಿ ಕರೆಯೊಂದು ಬಂದಿತ್ತು. ಕರೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೆರಳಿದ ಸಂಗೀತಾ ಅವರಿಗೆ ಅವಧುತಾತ್ಮ ಪತಿ ಮೆಲ್ ಆವರ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಸೇನಾಪಡೆಗೆ ಸೇರಿಕೊಳ್ಳುವಂತೆ ಮನವೊಲಿಸಿದ್ದಾರೆ. ಇದರಿಂದ ಪ್ರೇರಿತರಾಗಿ ಸಂಗೀತಾ ಕಾಶ್ಮೀರದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯನ್ನು ಸೇರಿದರು.