ಬಿಹಾರ: ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಪಘಾತ ತಪ್ಪಿಸಿದ ರೈಲ್ವೆ ಸಿಬ್ಬಂದಿ

ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ರೈಲು ಹಳಿ ತುಂಡಾಗಿರುವುದನ್ನು ರೈಲ್ವೆ ಸಿಬ್ಬಂದಿಯೊಬ್ಬರು ಲೋಕೋ ಪೈಲಟ್ ಗಮನಕ್ಕೆ ತರುವ ಮೂಲಕ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕಟಿಹಾರ್: ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ರೈಲು ಹಳಿ ತುಂಡಾಗಿರುವುದನ್ನು ರೈಲ್ವೆ ಸಿಬ್ಬಂದಿಯೊಬ್ಬರು ಲೋಕೋ ಪೈಲಟ್ ಗಮನಕ್ಕೆ ತರುವ ಮೂಲಕ ಮಂಗಳವಾರ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ.
ಪೂರ್ವ ಮಧ್ಯ ರೈಲ್ವೆಯ ವಕ್ತಾರ ರಾಜೇಶ್ ಕುಮಾರ್ ಅವರ ಪ್ರಕಾರ, ನವದೆಹಲಿ- ದಿಬ್ರುಗಢ ರಾಜಧಾನಿ ಎಕ್ಸ್ ಪ್ರೆಸ್ ರೈಲು ಆಗಮಿಸುವ ಕೆಲವೇ ನಿಮಿಷಗಳ ಮುನ್ನ ರೈಲ್ವೆ ಸಿಬ್ಬಂದಿ ಶಿವಾನಂದನ್ ಅವರು ಕಟಿಹಾರ್ ಜಿಲ್ಲೆಯ ಮನ್ಸಿ-ಮಹೇಶ್ ಖುಂಟ್ ಬಳಿ ರೈಲು ಹಳಿ ತುಂಡಾಗಿರುವುದನ್ನು ಗಮನಸಿದ್ದಾರೆ. ಕೂಡಲೇ ಹಳಿ ಮೇಲೆ ಡಿಟೋನೇಟರ್ ಇರಿಸಿ, ರೈಲು ನಿಲ್ಲಿಸುವ ಫ್ಲ್ಯಾಗ್ ನೊಂದಿಗೆ ಓಡಿದ್ದಾರೆ.
ಕೆಂಪು ಬ್ಯಾನರ್ ನ ಫ್ಲ್ಯಾಗ್ ನೋಡಿದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಚಾಲಕ ತಕ್ಷಣವೇ ರೈಲು ನಿಲ್ಲಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಹಳಿ ದುರಸ್ಥಿ ಕಾರ್ಯ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com