ಪೂರ್ವ ಮಧ್ಯ ರೈಲ್ವೆಯ ವಕ್ತಾರ ರಾಜೇಶ್ ಕುಮಾರ್ ಅವರ ಪ್ರಕಾರ, ನವದೆಹಲಿ- ದಿಬ್ರುಗಢ ರಾಜಧಾನಿ ಎಕ್ಸ್ ಪ್ರೆಸ್ ರೈಲು ಆಗಮಿಸುವ ಕೆಲವೇ ನಿಮಿಷಗಳ ಮುನ್ನ ರೈಲ್ವೆ ಸಿಬ್ಬಂದಿ ಶಿವಾನಂದನ್ ಅವರು ಕಟಿಹಾರ್ ಜಿಲ್ಲೆಯ ಮನ್ಸಿ-ಮಹೇಶ್ ಖುಂಟ್ ಬಳಿ ರೈಲು ಹಳಿ ತುಂಡಾಗಿರುವುದನ್ನು ಗಮನಸಿದ್ದಾರೆ. ಕೂಡಲೇ ಹಳಿ ಮೇಲೆ ಡಿಟೋನೇಟರ್ ಇರಿಸಿ, ರೈಲು ನಿಲ್ಲಿಸುವ ಫ್ಲ್ಯಾಗ್ ನೊಂದಿಗೆ ಓಡಿದ್ದಾರೆ.