ಜನರಿಗೆ ಉಪಯೋಗವಾಗುವ ಹಾಗೂ ಸಹಾಯವಾಗುವ ಯೋಜನೆಗಳು ಮಾತ್ರ ಅಂಗೀಕಾರಗೊಳ್ಳುತ್ತವೆ. ಯೋಜನೆಯ ಗುತ್ತಿಗೆ ಹಾಗೂ ನಿರ್ಮಾಣ ಕಾರ್ಯಗಳು ಪಾರದರ್ಶಕವಾಗಿರಲಿದೆ. ಯಾವುದೇ ಕೆಲಸ ಕಾರ್ಯಗಳು ನಡೆದರೂ ಅಲ್ಲಿ ನನ್ನ ಹೆಸರಿದ್ದೇ ಇರುತ್ತದೆ. ಹೀಗಾಗಿ ಯಾವುದೇ ಕೆಲಸದಲ್ಲಿಯೇ ಆದರೂ ಭ್ರಷ್ಟಾಚಾರ ನಡೆದರೆ, ಅಂತಹ ಅಧಿಕಾರಿಗಳ ಕತ್ತು ಸೀಳುತ್ತೇನೆ, ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುತ್ತೇನೆಂದು ಹೇಳಿದ್ದರು.