ಇನ್ನು ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಉತ್ತರ ನೀಡಲು ನಿರಾಕರಿಸಿರುವ ಸಚಿವ ಕಾಳಿಚರಣ್ ಸರಫ್ ಅವರು, ಇದೇನೂ ದೊಡ್ಡ ವಿಚಾರವಲ್ಲ, ಬಿಡಿ ಎಂದು ಉಡಾಫೆ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಇನ್ನು ಕಾಳಿಚರಣ್ ಅವರ ಈ ಕಾರ್ಯ ರಾಜಸ್ತಾನದ ಸಿಎಂ ವಸುಂಧರಾ ರಾಜೇ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದು, ಬಿಜೆಪಿ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೂ ಹಿನ್ನಡೆಯುಂಟು ಮಾಡಿದೆ. ಅಭಿಯಾನ ನಡೆಸುವ ಸರ್ಕಾರದ ಮಂತ್ರಿಗಳೇ ಕಾನೂನು ಮುರಿದರೆ ಸಾರ್ವಜನಿಕರು ಹೇಗೆ ನಿಯಮ ಪಾಲಿಸುತ್ತಾರೆ ಎಂಬ ವಾದ ಕೂಡ ಕೇಳಿಬರುತ್ತಿದೆ.