ಗುಜರಾತ್ ನ ಭಾವ್ ನಗರದ ಆಭರಣ ವ್ಯಾಪಾರಿ ದಿಗ್ವಿಜಯ್ ಸಿಂಗ್ ಜಡೇಜಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, 2015ರಲ್ಲೇ ಗೀತಾಂಜಲಿ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ವಿರುದ್ಧ ಗುಜರಾತ್ ಸರ್ಕಾರ ಮತ್ತು ಹೈಕೋರ್ಟ್ ನಲ್ಲಿ ದೂರು ದಾಖಲು ಮಾಡಿದ್ದೆ. ಆದರೆ ಅಂದು ನನ್ನ ದೂರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಿಗೆ ನನ್ನ ಮೇಲೆ ಒತ್ತಡ ಹೇರಿ ನನ್ನ ಬಾಯಿ ಮುಚ್ಚಿಸಿದ್ದರು. ಅಂದು ಚೋಕ್ಸಿಗೆ ಬೆಂಬಲ ನೀಡದೇ ಇದ್ದಿದ್ದರೆ ಇಂದು ಇಷ್ಟು ದೊಡ್ಡ ಹಗರಣ ನಡೆಯುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ.